ಮೊನ್ನೆ ಅಚಾನಕ್ಕಾಗಿ-
ಮೊನ್ನೆ ಅಚಾನಕ್ಕಾಗಿ ಬೇಟಿಯಾದಳು
ಕಾಡಿಗೆ ಹಚ್ಚಿರಲಿಲ್ಲ
ಕಣ್ಣಕೆಳಗೆ ಕಪ್ಪು ಉಂಗುರಗಳು
ಮೊನ್ನೆ ಅಚಾನಕ್ಕಾಗಿ ಬೇಟಿಯಾದಳು
ನಗಲಿಲ್ಲ
ತುಟಿಯೊಳಗಿದ್ದುದು ಮಾತ್ರ ಅಳು
ಮೊನ್ನೆ ಅಚಾನಕ್ಕಾಗಿ ಬೇಟಿಯಾದಳು
ಸುಖದ ಕತೆಯನ್ನೆನು ಬಿಚ್ಚಿಡಲಿಲ್ಲ
ಕೊರಳಲ್ಲಿ ತಡೆ ಹಿಡಿದಿದ್ದು ಮಾತ್ರ ದು:ಖದ ಬಿಕ್ಕುಗಳು
ಮೊನ್ನೆ ಅಚಾನಕ್ಕಾಗಿ ಬೇಟಿಯಾದಳು
ಸತ್ತೇನು ಹೋಗಿರಲಿಲ್ಲ
ಬದುಕಿದ್ದಕ್ಕೆ ಪುರಾವೆಯೂ ಸಿಗಲಿಲ್ಲ
ಬೇಡುತ್ತೇನೆ ದೇವರನ್ನು
ಮತ್ತೆಂದೂ
ಅವಳು ಅಚಾನಕ್ಕಾಗಿ ಎದುರಾಗದಿರಲೆಂದು!
ನಕ್ಷತ್ರಗಳು ಉದುರಬಾರದು
ಉಲ್ಕೆಗಳಂತೆ
ದೇವಾ, ಕರುಣೆಯಿರಲಿ!
*****
ಕು.ಸ.ಮಧುಸೂದನ